ಏಕೆ ನೀಡಿದೆ ಈ ಜೀವನ ಕಲ್ಲು ಮುಳ್ಳುಗಳ ನೋವಿನ ಪಯಣ ಸಂತೋಷದ ಕ್ಷಣಗಳು ಕ್ಷಣಿಕ ದುಃಖವೇ ಶಾಶ್ವತ ಬಳಿಕ
ನೆಮ್ಮದಿಯಿರದ ಈ ಬಾಳು ನಿತ್ಯವೂ ಒಂದೊಂದು ಗೋಳು ಮನದಲ್ಲಿ ಎದ್ದಿದೆ ಅಶಾಂತಿಯ ಅಲೆ ಆನಂದವು ಕಳೆದುಕೊಂಡಿದೆ ತನ್ನ ನೆಲೆ
ಯಾರಿಗೆ ಬೇಕು ಈ ನೀರಸ ಬದುಕು ಸಂತಸವಿಲ್ಲಿ ಹರುಕು ಮುರುಕು ಸಾಯಲೂ ಸಾಲುತ್ತಿಲ್ಲ ಧೈರ್ಯ ದೇವರೇ ಸಾಕು ನಿನ್ನೀ ಕ್ರೌರ್ಯ
ಒಂದಾದ ಮೇಲೊಂದು ಕಷ್ಟಗಳು ಅನಿಸಿದೆ ಬಾಳು ನರಕ ಸಾಕಾಗಿದೆ ಈ ನರಕದ ಸಹವಾಸ ಇದಕ್ಕಿಂತ ವಾಸಿ ವನವಾಸ
ಎಲ್ಲವ ತೊರೆಯಲೂ ಆಗದೆ ಮರೆಯಲೂ ಬಾರದೆ ಬದುಕಲೂ ಆಗದೆ ಬಿಸಿತುಪ್ಪದಂತೆ ಈ ಬದುಕು
No comments:
Post a Comment