ಹೊರಗೆ ತಂಗಾಳಿ ಬೀಸುತ್ತಿದ್ದರೂ ಏನು ಪ್ರಯೋಜನ?
ಒಳಗೆ ಮನವು ಕುದಿಯುತ್ತಿದೆ
ಏಕೋ ಕಸಿವಿಸಿ ಏನೋ ತಳಮಳ
ಹೇಳಲೂ ಬಾರದು ಹೇಳದೆ ಇರಲಾಗದು
ಈ ಸಂಕಟವೇ ಕಿತ್ತು ತಿನ್ನುತ್ತಿದೆ
ಏನೂ ಮಾಡಲು ದಾರಿ ತೋಚದು
ಆಗಿದೆ ಸ್ಥಿತಿಯು ಅಡಕತ್ತರಿಯಲ್ಲಿರುವ ಅಡಕೆಯಂತೆ
Post a Comment
No comments:
Post a Comment