Thursday, June 11, 2020

ಕುಂಕುಮ

ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡ ಅವನಿಯ ದೃಷ್ಟಿ ಬೈತಲೆಯಲ್ಲಿದ್ದ ಕೆಂಪು ಕುಂಕುಮದ ಮೇಲೆ ಹೋಯಿತು. ಇಂದು ಅವಳ ಮದುವೆಯ ಮೊದಲ ವಾರ್ಷಿಕೋತ್ಸವ.
೮ ವರ್ಷಗಳ ಹಿಂದೆ ೯ ತಿಂಗಳ ತುಂಬು ಗರ್ಭಿಣಿಯಾಗಿದ್ದ ಅವಳಿಗೆ ಬರಸಿಡಿಲಿನಂತೆ ಅಪ್ಪಳಿಸಿದ್ದು ಆಕಾಶನ ಸಾವಿನ ಸುದ್ಧಿ, ಅದೂ ಕೂಡ ಅವರ ಮದುವೆಯ ಮೊದಲನೆಯ ವಾರ್ಷಿಕೋತ್ಸವದ ದಿನದಂದು. ಇಷ್ಟು ವರ್ಷಗಳು ಅವಳು ಬದುಕಿದ್ದು ಕೇವಲ ಮಗನ ಸಲುವಾಗಿ.
ಈಗ ೨ ವರ್ಷಗಳ ಹಿಂದೆ ಅವಳ ಸಹೋದ್ಯೋಗಿ ವಿನಯ್ ಅವಳ ಬಗ್ಗೆ ಎಲ್ಲ ವಿಷಯ ತಿಳಿದೂ ಮದುವೆಯಾಗಲು ಇಚ್ಚಿಸಿದಾಗ ಅವನಿ ಸಾರಾಸಗಟಾಗಿ ನಿರಾಕರಿಸಿದ್ದಳು. ಕೊನೆಗೆ ತಂದೆ ತಾಯಿಯ ಒತ್ತಡ, ಸಮಾಜದಲ್ಲಿ ಒಂಟಿಯಾಗಿ ಬದುಕುವ ಕಷ್ಟ ಹಾಗೂ ತನ್ನ ಮಗನ ಭವಿಷ್ಯದ ದೃಷ್ಟಿಯಿಂದ ಒಪ್ಪಬೇಕಾಯಿತು.
ಆದರೆ ಇಂದು, ಅವನಿಯಷ್ಟು ಸುಖಿ ಯಾರೂ ಇಲ್ಲವೇನೋ. ಖಾಲಿ ಹಾಳೆಯಂತಾಗಿದ್ದ ಅವಳ ಬದುಕಿಗೆ ಬಣ್ಣ ತುಂಬಿದ್ದ ವಿನಯ್.

No comments: