ಕಥೆಗಳೆಂದರೆ ಯಾವ ಮಕ್ಕಳಿಗೆ ಇಷ್ಟವಿಲ್ಲ? ಎಲ್ಲರಿಗೂ ಇಷ್ಟ. ನಮ್ಮ ಬಾಲ್ಯದ ಸವಿನೆನಪುಗಳಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಬಿಡುವಿದ್ದಾಗ ಹೇಳುತ್ತಿದ್ದ ಕಥೆಗಳೂ ಒಂದು. ರಾತ್ರಿ ಮಲಗುವ ವೇಳೆ, ವಿದ್ಯುತ್ ಕಡಿತವಾಗಿ ಚಿಮಣಿ ಬುಡ್ಡಿ ಹಚ್ಚಿ ಕೂತ ವೇಳೆ ಅಥವಾ ಇನ್ಯಾವಾಗಲೋ ಹೊತ್ತು ಹೋಗದಾದಾಗ ಕಥೆ ಹೇಳಿರೆಂದು ದೊಡ್ಡವರನ್ನು ನಾವೆಲ್ಲರೂ ಪೀಡಿಸಿದ್ದಿದೆ. ಆದರೆ, ಈಗ ನಮ್ಮ ಮಕ್ಕಳಿಗೆ ನಾವೆಷ್ಟು ಕಥೆಗಳನ್ನು ಹೇಳುತ್ತಿದ್ದೇವೆ? ಕೆಲಸದ ಒತ್ತಡ, ಸಮಯದ ಅಭಾವ ಅಥವಾ ಮೊಬೈಲ್, ಟಿವಿ ಪ್ರಭಾವದಿಂದಾಗಿ ಮಕ್ಕಳಿಗೆ ಕಥೆ ಹೇಳುವ ಪದ್ಧತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಹೆಚ್ಚೆಂದರೆ, ಟಿವಿ ಅಥವಾ ಮೊಬೈಲಿನಲ್ಲಿ ಅವರ ನೆಚ್ಚಿನ ಕಾರ್ಟೂನ್ ಅಥವಾ ನೀತಿ ಕಥೆಗಳ ಸರಣಿಯನ್ನು ಹಾಕಿಕೊಟ್ಟೇವು.
ನಾವೆಲ್ಲರೂ ಪಂಚತಂತ್ರ ಕಥೆಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ ಅಲ್ಲವೇ? ಅಮರಶಕ್ತಿಯೆಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸುತ್ತಾನೆ. ಸಾಂಪ್ರದಾಯಿಕವಾಗಿ ವಿದ್ಯೆ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ, ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲಶಾಸ್ತ್ರಕೋವಿದನಾದ 80 ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗುತ್ತದೆ. ವಿಷ್ಣುಶರ್ಮನು ಆರು ತಿಂಗಳುಗಳಲ್ಲಿ ಅವರನ್ನು ನೀತಿಶಾಸ್ತ್ರದಲ್ಲಿ ಕೌಶಲರನ್ನಾಗಿ ಮಾಡುತ್ತೇನೆಂದು ಅವರಿಗಾಗಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿ ಬೋಧಿಸುತ್ತಾನೆ. ಅದೊಂದು ಸಣ್ಣ ಸಣ್ಣ ನೀತಿ ಕಥೆಗಳನ್ನು ಒಂದರೊಳಗೊಂದು ಅನ್ಯೊನ್ಯವಾಗಿ ಹೆಣೆಯಲ್ಪಟ್ಟ ಸರಣಿಯಾಗಿದೆ. ಪ್ರಾಣಿಗಳೇ ಮುಖ್ಯ ಪಾತ್ರಧಾರಿಗಳು. 6 ತಿಂಗಳು ಮುಗಿಯುವುದರ ಒಳಗೆ, ಮೂರ್ಖರಾಗಿದ್ದ ರಾಜಕುಮಾರರು ಬುದ್ಧಿವಂತರಾಗಿ, ರಾಜ್ಯದ ಹೊಣೆ ಹೊರಲು ತಕ್ಕವರಾಗಿರುತ್ತಾರೆ. ಇದರಿಂದ ತಿಳಿಯುವುದೇನೆಂದರೆ, ಕಥೆಗಳು ಎಷ್ಟು ಪರಿಣಾಮಕಾರಿ ಎಂದು.
ಮಕ್ಕಳಿಗೆ ಕಥೆ ಹೇಳುವುದರಿಂದ ಹಲವಾರು ಪ್ರಯೋಜನಗಳಿವೆ
ಇಷ್ಟೇ ಅಲ್ಲದೆ, ನಾವು ಹೇಳುವ ಉತ್ತಮ ಕಥೆಗಳಿಂದ ಮಕ್ಕಳಿಗೆ ಮುಂದೆ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು, ಸವಾಲುಗಳನ್ನು ಸ್ವೀಕರಿಸಲು, ನೋವನ್ನು ಸಹಿಸಿಕೊಳ್ಳಲು, ಧೈರ್ಯದಿಂದ ಮುನ್ನುಗ್ಗಲು ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರಿಯಾಗುತ್ತದೆ.
ಇನ್ನು ಮುಂದೆ ನಿಮಗೆ ಬಿಡುವಿದ್ದಾಗ, ಕೆಲಸ ಮಾಡುವಾಗ, ಮಕ್ಕಳೊಂದಿಗೆ ವಾಯು ವಿಹಾರಕ್ಕೆ ಹೋದಾಗ, ಪ್ರಯಾಣ ಮಾಡುವಾಗ ಹೀಗೆ ಸಾಧ್ಯವಾದಾಗಲೆಲ್ಲ ಖಂಡಿತ ಕಥೆ ಹೇಳಲು ಮರೆಯದಿರಿ.
ನಾವೆಲ್ಲರೂ ಪಂಚತಂತ್ರ ಕಥೆಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ ಅಲ್ಲವೇ? ಅಮರಶಕ್ತಿಯೆಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸುತ್ತಾನೆ. ಸಾಂಪ್ರದಾಯಿಕವಾಗಿ ವಿದ್ಯೆ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ, ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲಶಾಸ್ತ್ರಕೋವಿದನಾದ 80 ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗುತ್ತದೆ. ವಿಷ್ಣುಶರ್ಮನು ಆರು ತಿಂಗಳುಗಳಲ್ಲಿ ಅವರನ್ನು ನೀತಿಶಾಸ್ತ್ರದಲ್ಲಿ ಕೌಶಲರನ್ನಾಗಿ ಮಾಡುತ್ತೇನೆಂದು ಅವರಿಗಾಗಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿ ಬೋಧಿಸುತ್ತಾನೆ. ಅದೊಂದು ಸಣ್ಣ ಸಣ್ಣ ನೀತಿ ಕಥೆಗಳನ್ನು ಒಂದರೊಳಗೊಂದು ಅನ್ಯೊನ್ಯವಾಗಿ ಹೆಣೆಯಲ್ಪಟ್ಟ ಸರಣಿಯಾಗಿದೆ. ಪ್ರಾಣಿಗಳೇ ಮುಖ್ಯ ಪಾತ್ರಧಾರಿಗಳು. 6 ತಿಂಗಳು ಮುಗಿಯುವುದರ ಒಳಗೆ, ಮೂರ್ಖರಾಗಿದ್ದ ರಾಜಕುಮಾರರು ಬುದ್ಧಿವಂತರಾಗಿ, ರಾಜ್ಯದ ಹೊಣೆ ಹೊರಲು ತಕ್ಕವರಾಗಿರುತ್ತಾರೆ. ಇದರಿಂದ ತಿಳಿಯುವುದೇನೆಂದರೆ, ಕಥೆಗಳು ಎಷ್ಟು ಪರಿಣಾಮಕಾರಿ ಎಂದು.
ಮಕ್ಕಳಿಗೆ ಕಥೆ ಹೇಳುವುದರಿಂದ ಹಲವಾರು ಪ್ರಯೋಜನಗಳಿವೆ
- ಸದ್ಗುಣಗಳನ್ನು ಬೆಳೆಸಲು ಸಹಕಾರಿ
- ಕಲೆ, ಸಂಸ್ಕೃತಿಗಳ ಪರಿಚಯ
- ಭಾಷಾಜ್ಞಾನ ಸುಧಾರಣೆ
- ಕಲ್ಪನಾಶಕ್ತಿ ಮತ್ತು ಕ್ರಿಯಾಶೀಲತೆ ಹೆಚ್ಚಿಸುತ್ತದೆ
- ಜ್ಞಾಪಕಶಕ್ತಿ ಹೆಚ್ಚಳ
- ಓದುವ ಹವ್ಯಾಸ
ಇಷ್ಟೇ ಅಲ್ಲದೆ, ನಾವು ಹೇಳುವ ಉತ್ತಮ ಕಥೆಗಳಿಂದ ಮಕ್ಕಳಿಗೆ ಮುಂದೆ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು, ಸವಾಲುಗಳನ್ನು ಸ್ವೀಕರಿಸಲು, ನೋವನ್ನು ಸಹಿಸಿಕೊಳ್ಳಲು, ಧೈರ್ಯದಿಂದ ಮುನ್ನುಗ್ಗಲು ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರಿಯಾಗುತ್ತದೆ.
ಇನ್ನು ಮುಂದೆ ನಿಮಗೆ ಬಿಡುವಿದ್ದಾಗ, ಕೆಲಸ ಮಾಡುವಾಗ, ಮಕ್ಕಳೊಂದಿಗೆ ವಾಯು ವಿಹಾರಕ್ಕೆ ಹೋದಾಗ, ಪ್ರಯಾಣ ಮಾಡುವಾಗ ಹೀಗೆ ಸಾಧ್ಯವಾದಾಗಲೆಲ್ಲ ಖಂಡಿತ ಕಥೆ ಹೇಳಲು ಮರೆಯದಿರಿ.
No comments:
Post a Comment