ನಮ್ಮ ಮನೆಗೊಬ್ಬಳು
ವಿಶೇಷ ಅತಿಥಿ ಬಂದಿರುವಳು
ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಇವಳು
ಶ್ವೇತ ಮತ್ತು ಕೃಪಾನಿಧಿಯ ಮಗಳು
ಪುಟ್ಟಿ,ಪುಟಾಣಿ ಗಿಣಿ,ಚಿನ್ನಿ,ಗುಂಡು,ಬಂಗಾರು
ಹೀಗೆ ಇವಳಿಗೆ ಮುದ್ದು ಹೆಸರುಗಳು ಹಲವಾರು
ಆದರೂ ಇವಳಿಗೊಂದು ವ್ಯವಹಾರ ನಾಮ ಕೊಡಲು ಇಚ್ಛಿಸಿದೆವು
ಅದಕ್ಕಾಗಿ ನಿಮಗೀ ಕರೆಯೋಲೆ ಕಳಿಸಿದೆವು
26-01-2012 ರಂದು ನಡೆಯುವ ನಾಮಕರಣ ಮಹೋತ್ಸವಕ್ಕೆ
ಚಾಮರಾಜಪೇಟೆಯ ಕೃಷ್ಣ ವಾದಿರಾಜವೇ ನಾವಾರಿಸಿದ ಸ್ಥಳ
ಅಂದು ನೀವುಗಳೆಲ್ಲ ತಪ್ಪದೇ ಅಲ್ಲಿಗೆ ಬಂದು
ಸೇರಬೇಕೆಂದು ನಮ್ಮ ಹಂಬಲ
ಸಮಾರಂಭದಲ್ಲಿ ಪಾಲ್ಗೊಂಡು ಮಗುವಿನ
ಆಯುರಾರೋಗ್ಯಕ್ಕಾಗಿ ಆಶೀರ್ವದಿಸಿ
ಹೀಗೆಂದು ಕೋರುವ
ನಿಮ್ಮೆಲ್ಲರ ವಿಶ್ವಾಸಿ
ವೈದ್ಯ ಕುಟುಂಬ ಉಡುಪ ಕುಟುಂಬ